ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ.
ಪ್ರತಿ ಬಾರಿ ಈರುಳ್ಳಿ ಬೆಳೆ ಕೈಗೆ ಬರುವಷ್ಟರಲ್ಲಿ ಇಲ್ಲವೇ ದರ ಕುಸಿದಿರುತ್ತದೆ, ಇಲ್ಲವೇ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಹವಾಮಾನ, ಮಳೆ ಇತ್ಯಾದಿ ಕಾರಣಗಳಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಇದು ಹಲವು ವರ್ಷಗಳಿಂದ...
ಬೆಂಗಳೂರು : ಇದನ್ನು ಮತ್ತೊಂದು ಸಾಮಾನ್ಯ ಸುದ್ದಿ ಎಂದು ಮೂಗು ಮುರಿಯಬೇಡಿ. ಯಾಕೆಂದರೆ ಹಾಗೆ ಒಂದು ವೇಳೆ ಮೂಗು ಮುರಿದು ಕಡೆಗಣಿಸಿದರೆ ಅದು ನಮ್ಮನ್ನೇ ನುಂಗಿ ಬಿಡಬಹುದು.
ಹಾಗೆಂದು ಮೊಸಳೆಯ ಸಂಗತಿಯಲ್ಲ, ಬದಲಾಗಿ ಮೊಸಳೆಗಿಂತಲೂ ಘೋರ ಎಂಬಂತೆ ಬೆಳೆಯುತ್ತಿರುವ ಪ್ಲಾಸ್ಟಿಕ್ ನ ಕಥೆಯಿದು.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ನೇಚರ್ ನ ಹೊಸ ಅಧ್ಯಯನ ವರದಿ ಪ್ರಕಾರ ನಮ್ಮ ದೇಶ...
ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಹೈಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ಪೀಠಕ್ಕೆ ತಿಳಿಸಿರುವ ಮಾಹಿತಿ ಹಾಗೂ ಅಂಕಿಅಂಶಗಳ ಪ್ರಕಾರ ಯಮುನಾ ನದಿಯ ಪ್ರವಾಹ ಪಾತ್ರದ ಶೇ. 75 ರಷ್ಟು ಪ್ರದೇಶ ಒತ್ತುವರಿಯಾಗಿದೆ.
ಅದರ ತೆರವಿಗೆ 2022 ರಿಂದ ಪ್ರಯತ್ನಗಳು ನಡೆದಿದೆ. ಇದೂವರೆಗೆ ಕೇವಲ 400 ಎಕರೆಯಷ್ಟು ಪ್ರದೇಶವನ್ನು ವಾಪಸು ಪಡೆಯಲು ಸಾಧ್ಯವಾಗಿದೆ. ಒಟ್ಟೂ ಪ್ರವಾಹ ಪಾತ್ರದ 9,...
ಪ್ರವಾಸೋದ್ಯಮ ಭವಿಷ್ಯದ ಉದ್ಯಮ, ಉದ್ಯೋಗ ಕ್ಷೇತ್ರ ಎಂದೆಲ್ಲ ಬಿಂಬಿಸಲಾಗುತ್ತಿದೆ. ನಿಜವೂ ಇರಬಹುದು. ಪರಿಸರವನ್ನೂ ಉಳಿಸಿಕೊಂಡು ಹೇಗೆ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ.
ಅವರು ಆ ಊರಿನಲ್ಲಿ ಆ ಗಿಡ ನೆಟ್ಟರು, ಚೆನ್ನಾಗಿದೆ, ಒಳ್ಳೆ ಹೂವುಗಳು ಬಿಟ್ಟಿವೆ. ಹೂವುಗಳು ಸುಂದರವಾಗಿವೆ ಎಂದು ಒಂದು ಕಡ್ಡಿ ತಂದು ನಮ್ಮ ಊರಿನ ಮಣ್ಣಿನಲ್ಲಿ ನೆಟ್ಟರೆ ಬರುತ್ತದೆಯೇ? ಗೊತ್ತಿಲ್ಲ,...
ಬೆಂಗಳೂರು ಮತ್ತಷ್ಟು ಕಾವೇರಿ ನೀರನ್ನು ತರಿಸಿಕೊಳ್ಳಲು ಸಿದ್ಧವಾಗುತ್ತಿರುವ ಹೊತ್ತು. ಹಲವು ನಗರಗಳಲ್ಲಿ ನೀರಿನ ಬೇಗೆ ಹೆಚ್ಚಾಗಿ ನಾಗರಿಕರು ಪರಸ್ಪರ ಯುದ್ಧಕ್ಕೆ ಸಜ್ಜಾಗುತ್ತಿರುವ ಹೊತ್ತು. ರಾಜಕಾರಣಿಗಳು ಪರಸ್ಪರ ಧಿಕ್ಕಾರ ಕೂಗಿಕೊಂಡು, ಘೋಷಣೆ ಹಾಕಿಕೊಳ್ಳುತ್ತಾ ಬೈದಾಡಿಕೊಳ್ಳುತ್ತಿರುವ ಹೊತ್ತು..ಈ ಹೊತ್ತು ಇಷ್ಟಕ್ಕೇ ಮುಗಿಯುವುದಿಲ್ಲ. ನೀರಿನ ಕೊರತೆಯ ಹಿಡಿತ ದಿನೇದಿನೆ ನಗರಗಳಲ್ಲಿ ಬಿಗಿಯಾಗುತ್ತಿದೆ. ಈಗಾಗಲೇ ಬಹುತೇಕ ನಗರ, ಅರೆನಗರಗಳಲ್ಲಿ ನೀರಿನ...
ಖಂಡಿತಾ ಇದು ನಗರಗಳ ಕುರಿತ ಋಣಾತ್ಮಕ ನೆಲೆಯ ಮಾತಲ್ಲ. ಆದರೂ ಒಮ್ಮೆ ಆಲೋಚಿಸಿ. ನಮ್ಮ ನಗರಗಳಿಗೆ ಏನಾಗಿದೆ? ಏನಾಗುತ್ತಿದೆ? ಯಾಕೆ ಹೀಗಾಗುತ್ತಿದೆ?- ಈ ಮೂರು ಪ್ರಶ್ನೆಗಳನ್ನು ಎದುರಿಟ್ಟುಕೊಂಡು ನಗರವನ್ನು ಶೋಧಿಸುತ್ತಾ ಹೊರಟರೆ ನಮಗೆ ಪರಿಹಾರಗಳು ಸಿಗಬಹುದು. ಉತ್ತರವನ್ನು ಕಂಡುಕೊಂಡು ಅನುಭವಿಸುವ ಖುಷಿಗೆ ತಲುಪಬಹುದು. ಅದು ಸಾಧ್ಯವೇ? ಅದರಲ್ಲೂ ನಮ್ಮನ್ನಾಳುವವರಿಗೆ, ಆಡಳಿತ ಸಂಸ್ಥೆಗಳಿಗೆ ಸಾಧ್ಯವೇ?ಎಂಬುದು ಮತ್ತೂ...
ಎರಡು ದಿನಗಳಿಂದ ಮಳೆ ತೊಟ್ಟಿಕ್ಕತೊಡಗಿದೆ. ಕೆಲವು ಕಡೆ ತುಸು ಜೋರಾಗಿ, ಇನ್ನು ಕೆಲವೆಡೆ ತೊಟ್ಟಿಕ್ಕುವ ಮಾದರಿಯಲ್ಲಿ, ಇನ್ನೂ ಹಲವೆಡೆ ಬಂದು ಹೋದೆ ಎನ್ನುವುದಕ್ಕಷ್ಟೇ ಎನ್ನುವ ಹಾಗೆ ಮಳೆ ಬಂದಿದೆ. ಇದು ಮುಂಗಾರು ಪೂರ್ವ ಮಳೆ. ಹಾಗಾದರೆ ಮುಂಗಾರು ಚೆನ್ನಾಗಿರಬಹುದೆಂದು ರೈತರಾದಿಯಾಗಿ ಭಾವಿಸತೊಡಗಿದ್ದಾರೆ. ನಗರದ ಮಂದಿಯೂ ಮಳೆಯ ನೀರು ಚರಂಡಿಯಲ್ಲಿ ತುಂಬಿ ರಾಡಿ ಎಬ್ಬಿಸುವಾಗ ಬೈದುಕೊಳ್ಳಬಹುದು...
ನದಿ ಬನಾಯಾ ನಾಲಾ, ಕಿಸ್ನೆ ಕಿಯಾ ಗೋಟಾಲ, ಗೋಟಾಲ ಗೋಟಾಲ..ಸಿನಿಮಾ ಉತ್ಸಾಹಿ ನ ನಿತಿನ್ ದಾಸ್ ರೂಪಿಸಿರುವ 2.37 ನಿಮಿಷಗಳ ಹಾಡು 'ಗೋಟಾಲ..ಗೋಟಾಲ..ನದಿ ಬನಾಯಾ ನಾಲಾ' ಪುಣೆಯ ನದಿಗಳ ದುರಂತ ಕಥೆಯನ್ನು ಹೇಳುತ್ತದೆ. ದುರಂತಗಾಥೆಯನ್ನು ಅತ್ಯುತ್ತಮ ಸಂಗೀತ ಹಾಗೂ ಮಾಹಿತಿಯೊಂದಿಗೆ ನಾಗರಿಕರಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ ನಿತಿನ್. ಈ ನದಿಯ ಹಾಡನ್ನು ನೋಡಿ ನಮ್ಮ ನದಿಯನ್ನು...
ಇಂದ್ರನ ಅಮರಾವತಿ ಬಗ್ಗೆ ಕೇಳಿದ್ದೆವು. ಇದು ಚಂದ್ರನ ಅಮರಾವತಿ ಬಗ್ಗೆ. ಅಂದರೆ ತೆಲುಗು ದೇಶಂನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಮರಾವತಿ. ಆಂಧ್ರ ಪ್ರದೇಶದ ಕನಸಿನ ರಾಜಧಾನಿ. ಅಮರಾವತಿ ಇಂದ್ರನ ರಾಜಧಾನಿಗಿಂತ ಚೆನ್ನಾಗಿ ಆಗಬಹುದೇ? ಇಂಥದೊಂದು ಪ್ರಶ್ನೆ ಉದ್ಭವಿಸಿತ್ತು. ಚಂದ್ರಬಾಬು ನಾಯ್ಡು ಕನಸಿದು. ಮುಖ್ಯಮಂತ್ರಿಯಾಗಿದ್ದಾಗ ನಗರ ನಿರ್ಮಾಣಕ್ಕೆ ಚಾಲನೆ ಕೊಟ್ಟರು. ಆದರೆ ನಂತರದ ಚುನಾವಣೆಯಲ್ಲಿ...
ನಗರಗಳಿಗೆ ಜೀವಜಲವಾದ ನದಿಗಳ ಮೂಲವೇ ನೀರಿನ ಕೊರತೆಯನ್ನು ಅನುಭವಿಸಲು ಆರಂಭಿಸದರೆ ಇದಕ್ಕೆ ಏನೆನ್ನಬೇಕು? ನಮ್ಮ ನಗರೀಕರಣದ ಹಪಹಪಿಸುವಿಕೆ ಇದಕ್ಕೆ ಕಾರಣವೆನ್ನಬೇಕೇ ಅಥವಾ ಲಭ್ಯ ನೀರನ್ನು ಸಂಪನ್ಮೂಲವನ್ನಾಗಿ ತಿಳಿಯದೇ ಅಂಧಾದುಂಧಿ ಮಾಡಿದುದರ ಪರಿಣಾಮವೇ? ನಮ್ಮ ನಿರ್ಲಕ್ಷ್ಯವೇ, ಅಸಡ್ಡೆಯೇ? ಎಂದು ವಿಶ್ಲೇಷಿಸಿದ್ದಾರೆ ಶ್ಯಾಮಸುಂದರ್. ಕೊಡಗು ಮರುಗುತ್ತಿದೆ; ಕಾಫಿ ಕರಟುತ್ತಿದೆ ; ಕಾವೇರಿ ಸೊರಗುತ್ತಿದ್ದಾಳೆ !
ಒಂದೇ ಸಾಲಿನಲ್ಲಿ ಸರಳವಾಗಿ...
ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ.
ಪ್ರತಿ ಬಾರಿ ಈರುಳ್ಳಿ...